Friday, May 11, 2018

ಏನೆಂದು ಹೇಳಲಿ ನಾ ಸಮಯಕೆ..


ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಹರ್ಷವರ್ಧನ ವನಕುದುರೆ' ಅವರ ಕವನ.. 

ಯಾವ ಜನುಮದ ಪಾಪದ ಪರಿಯೇ...
ಕಾಡುತಿರುತವೆ ಕಂಗಳು ನಿದಿರೆ ಸೋಕುವವರೆಗೆ...
ನಿತ್ಯವೆಂದರೆ ಸಾಕಾಗದು ಅದುವೆ ಸತ್ಯ ಕಟು ಸತ್ಯ...
ಸಮಯ ಸಾಲದಂತಿರುವಂತಿರುತದೆ...
ಆದರೆನೋ ಮನ ಬಯಸುತಿರುವಂತಿರುತದೆ...
ಬಯಕೆಯ ಬಾಗಿಲಿಂದ ಬಯಲಕಾಣುವಂತಿದೆ...
ಸಾಗದು ದೂರ ಸಮೀಪಿಸುವುದೆ ತೀರಾ?...
ಗತಿಸಿದವುಗಳೆಷ್ಟೋ ವಸಂತಗಳು ಹೊಸ ಚೈತ್ರದ ಚಿಗುರೆಲೆಗಳೊಂದಿಗೆ...
ಹೂಗಳರಳುತಿಹವು ಸಮಯ ಜಾರುವ ಮುನ್ನ...
ಯಾರ ಮುಡಿಗೆ ಸೇರುವುದೋ ಸುಗಂಧ ಮಾಸುವ ಮುನ್ನ...
ಕೇಳುತಿಹವು ಸಾವಿರ ಒಲವ ಕಂಗಳು...
ಶುಭ ಸೂಚನೆ ನೀಡು ನೀ ಮಳೆಗೆ ಕೊಡೆ ಹಿಡಿಯುವ ಮುನ್ನ...
ಏನೆಂದು ಹೇಳಲಿ ನಾ ಈ ಸಮಯಕೆ?...
ಮುಗುಳುನಗೆಯೊಂದೆ ಸಾಕು ಎಲ್ಲ ಪ್ರಶ್ನೆಗಳ ಮುಂದೆ...
ಅದುವೆ ಸರಿಉತ್ತರವೆಂದೆನಿಸುತಿದೆ ಜಂಟಿ ಯಾಗುವ ಮುನ್ನ...

ಮುಂಗಾರಿನ ಅಭಿಷೇಕಕೆ ಶಿರಬಾಗಲೇನು?...
ಹೊಸವಸಂತಕೆ ಸ್ವಾಗತ ಹೇಳಲೇನು?...

ಸಾವಿರ ಕಂಗಳ ಪರ ಕೇಳುತಿವೆ 
ಈ ಬ್ರಹ್ಮಚರ್ಯ ಜೀವನಕ್ಕೆ ಏನೆಂದು ಹೇಳಲಿಂದು?...

- ಹರ್ಷವರ್ಧನ ವನಕುದುರೆ.. 

Like this post? Like & Follow us on Facebook so you never miss out.


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...