Tuesday, February 13, 2018

ಆಶಾವಾದಿಯಾಗಿರು ಮಾನವ..

ಆಶಾವಾದಿಯಾಗಿರು ಮಾನವ ;
ತಾಳ್ಮೆಗೆ 'ಒಳಿತೇ' ಸಂಭಾವನೆ ;
ಕಪ್ಪನೆ ಮೋಡವು ಬೆಳ್ಳಿ ಗೆರೆಯ ಒಡೆಯನಾಗುವ ಹಾಗೆ,
ಕತ್ತಲ ರಾತ್ರಿಯ ಸರಿಸಿ ಬೆಳಕು ಬರುವ ಹಾಗೆ..
ಕಷ್ಟ ಕಾರ್ಪಣ್ಯಗಳ ಘಳಿಗೆ ಹೊಸತಲ್ಲ, ನೀನೇನು ಹೊರತಲ್ಲ;
ನಕ್ಕುಬಿಡು  ಒಮ್ಮೆ ಹಂಗಿಸುತ ಕಷ್ಟಗಳ..
ಕಾಳಿಂಗ ಸರ್ಪವನು ನೋಡಿ ಬಾಲ ಕೃಷ್ಣನು ಮುಗುಳ್ನಗೆಯ ಬೀರಿದ ಹಾಗೆ.

- ರಿಪುವರ್ಧನ..  



Like this post? Like & Share my Facebook page so that you never miss out any article: Click here 

2 comments:

  1. ಸೋತ ಮನಸಿಗೆ ಉತ್ಸಾಹ ಕಳಿಸಿದ ಮಗುವಿನ ಹಾಗೆ, ಈ ನಿಮ್ಮ ಸಾಲುಗಳು ನನ್ನ ಮೇಲೆ ಪ್ರಭಾವ ಬೀರಿವೆ ಹೀಗೆ.

    ReplyDelete

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...