Friday, February 9, 2018

ನನ್ನ ಬಗ್ಗೆ ಇನ್ನೊಂದಿಷ್ಟು :

ಈ ಬ್ಲಾಗ್ ನ ಮುಖಪುಟದಲ್ಲಿ ಅದಾಗಲೇ ತಿಳಿಸಿದ ಹಾಗೆ.. ನನ್ನ ಹೆಸರು 'ಗುರುರೇಣುಕಾರಾಜ್' (ರಿಪುವರ್ಧನ).

ಕನ್ನಡ ಸಾಹಿತ್ಯದೆಡೆಗೆ ಓದುಗರ ಒಲವು ಮೂಡಿಸುವ ಪ್ರಯತ್ನ, ಹಾಡು /ಕವನ /ಪದ್ಯ /ಚಿತ್ರ ಗೀತೆಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡುವ ತುಡಿತ.. ಇವೇ "ಭಾವತರಂಗ" ದ ಅಂತರಂಗ ಮತ್ತು ಬಹಿರಂಗ. ಈ ತರಂಗಗಳ ಭಾವಸುಧೆ ನಿಮ್ಮೆಲ್ಲರಿಗೂ ಆತ್ಮೀಯವಾಗುವುದೆಂಬ ಆಶಯ ನನ್ನದು.

ಸಮಯ ಸಿಕ್ಕಾಗ, ಮನಸ್ಸಿಗೆ ತೋಚಿದಾಗ, ತೋಚಿದ್ದು ಹಿಡಿಸಿದಾಗ.. ಒಂದೆರಡು ಸಾಲುಗಳನ್ನು ಗೀಚುವ ಪ್ರಯತ್ನ ಆಗಾಗ ಮಾಡುತ್ತಿರುತ್ತೇನೆ.

ನಾನು ಬರೆದದ್ದು 'ಕವಿತೆ' ಎನ್ನಿಸಿಕೊಳ್ಳಲು ಅರ್ಹವಿದೆಯೋ, ಇಲ್ಲವೋ ಗೊತ್ತಿಲ್ಲ... ಆದರೆ, ಮನಸಿನಲ್ಲಿ ಹುಟ್ಟಿದ ಭಾವನೆಗಳಿಗೆ ಶಬ್ದದ ರೂಪ ಕೊಡುವ ಒಂದು ಸಣ್ಣ ಯತ್ನ ಮಾಡುವುದರಲ್ಲಿ ಸಂಕೋಚವೇಕೆ.. ಅಲ್ಲವೇ ??

ಹೀಗೇ ಬರೆದ ಕೆಲವು ಸಾಲುಗಳನ್ನು ಈ ಬ್ಲಾಗ್ ನಲ್ಲಿ ಪ್ರಕಟಿಸಿದ್ದೇನೆ.. ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ, ಪ್ರೋತ್ಸಾಹಿಸಿ. 

ಧನ್ಯವಾದಗಳು.

ಅಂದ ಹಾಗೆ... 'ರಿಪುವರ್ಧನ' ನನ್ನ ಜನ್ಮನಾಮ. 










2 comments:

  1. This blog is just awesome. I have also read your poems. You have written your heart with those words. Congratulations & keep it up

    ReplyDelete

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...